ಅಂತೂ ಇಂತೂ
ಬೆಂಗಳೂರೆಂಬ ಮಾಯಾನಗರಿಗೆ ಬಂದು 3 ವರ್ಷಗಳಾಗುತ್ತಾ ಬಂತು. ಏನು ನೋಡಿದ್ಯಪ್ಪಾ ಬೆಂಗ್ಳೂರಲ್ಲಿ ಎಂದು ಯಾರಾದರು
ಕೇಳಿದರೆ ಏನು ಹೇಳಬಹುದು? ಪಂಚರಂಗಿ ಸ್ಟೈಲ್
ನಲ್ಲಿ ಉತ್ತರಿಸುವುದಾದರೆ, ಕ್ವಿಝ್ ಗಳು,
ಟೆಸ್ಟುಗಳು, ಕ್ಲಾಸ್ ರೂಮ್ ಕೊರೆತಗಳು, ವಾಹನಗಳ ಮೊರೆತಗಳು,
ಎತ್ತನೋಡಿದರತ್ತ ಬಿಮ್ ಟಿಸಿಗಳು, ಬಿಲ್ಡಿಂಗುಗಳು ಹಾಗೂ ಬೀದಿನಾಯಿಗಳು.... ಜೊತೆಜೊತೆಗೆ
ಬಗೆಬಗೆಯ ಜೀನ್ಸುಗಳು ಹಾಗೂ ಅವುಗಳಿಗೊಪ್ಪುವ ’ಹಿಂಗ್ಲೀಷು’
ಗಳು... ಅಯ್ಯೋ..! ಸಾಕಪ್ಪಾ.., ಎಲ್ಲಾ ನೋಡುತ್ತ್ತಾ ಹೋದರೆ ಇಷ್ಟೇನಾ ಲೈಫು ಎನಿಸಿಬಿಡುತ್ತದೆ.
ರೀ, ನಿಜವಾಗ್ಲೂ ನಾವು ಒಂದು ಮಾತು ನೆನಪಿಟ್ಕೋಬೇಕು ಕಣ್ರೀ...,
ಪರೀಕ್ಷೆಗಳಲ್ಲಿ ಪ್ರಾಮಾಣಿಕವಾಗಿ
ಬರೆದು ಕಡಿಮೆ ಅಂಕ ಬಂದರೆ ಅಧ್ಯಾಪಕರ ಬಾಯಿಗೆ ಆಹಾರವಾಗಬೇಕಾಗುತ್ತೆ, ಸುಮ್ನೆ ನಕಲು ಮಾಡಿ ಬರೆಯುವವರು ಆರಾಮವಾಗಿ ಬರೆದು ಅಧ್ಯಾಪಕರ ಹೊಗಳಿಕೆಗೆ
ಪಾತ್ರವಾಗುವುದು ಕಂಡಾಗ ’ಲೈಫು ಇಷ್ಟೇನೇ’
ಎಂದು ಸುಮ್ಮನಾಗುವುದು ಬಿಟ್ಟು ಇನ್ನೇನೂ ಮಾಡಲು
ಸಾಧ್ಯವಿಲ್ಲ. ಕೆಲವರು ಹೇಳಬಹುದು " its knowledge which is important, and
not marks". ಈ ಮಾತುಗಳು ನಿಜವೇ
ಆಗಿದ್ದರೂ ಒಂದು ಮಾತಂತು ಸತ್ಯ, ಇಂದು ಎಲ್ಲಾ
ಆಯ್ಕೆಗಳು purely knowledge based ಆಗಿದ್ದರೆ ಬಹುಶಃ ’influence'
ಹಾಗೂ ’ಭ್ರಷ್ಟಾಚಾರ’
ಮೊದಲಾದ ಪದಗಳು ಪದಕೋಶಗಳಲ್ಲೇ ಇರುತ್ತಿರಲಿಲ್ಲ ಅಲ್ಲವೇ?
ತಿಂಗಳಿಗೊಮ್ಮೆ ಬರುವ
ಟೇಸ್ಟ್ ಇಲ್ಲದ ಟೆಸ್ಟುಗಳು, festu ಗಳು, ಎಲೆಕ್ಷನ್
ಗಳು ಹಾಗೂ ಸರಕಾರಿ ಸೆಲೆಕ್ಷನ್ ಗಳು.... ಕನ್ನಡ ಕಾರ್ಯಕ್ರಮಗಳಲ್ಲಿ ಮಿಂಚಿ ಹೊರ ಬಂದ ಬಳಿಕ
ಕನ್ನಡ ಬಿಟ್ಟು ಇನ್ನೆಲ್ಲಾ ಭಾಷೆಯ ಚಲನಚಿತ್ರಗಳನ್ನು ನೋಡುವ great ’ಕನ್ ಡಾ’ ಪ್ರೇಮಿಗಳು..., ಕಾಲೇಜಿಗೆ ಬಂದ ಕೂಡಲೇ ಅದ್ಯಾವ ಹಾರ್ಮೋನಿನ ಪರಿಣಾಮವೋ ತಿಳಿಯದೆ ಬರೀ ಇಂಗ್ಲೀಷಿನಲ್ಲಿ
ಮಾತ್ರ ಮಾತನಾಡುವ ಲಲನಾಮಣಿಗಳು.., ಟಿ. ವಿ ಆನ್ ಮಾಡಿದರೆ
ರಿಯಾಲಿಟಿ ಬಿಟ್ಟು ಇನ್ನೆಲ್ಲವೂ ಇರುವ ರಿಯಾಲಿಟಿ ಶೋಗಳು.., ಈ ಕಾಲದಲ್ಲಿ ’ಗ್ರಾಮರ್’ ಗಿಂತ ’ಗ್ಲಾಮರ್ ’ ಮುಖ್ಯವೆಂಬ
ಭ್ರಮೆಯಲ್ಲಿರುವ ಹಲವು ವ್ಯಕ್ತಿತ್ವಗಳು....
ಹೀಗೆ ಹೇಳುತ್ತಾ
ಹೋದರೆ ಮುಗಿಯೋದೇ ಇಲ್ಲ ಕಣ್ರೀ... ಇಲ್ಲಿನ ಲೈಫೇ ಹಿಂಗೆ.. ನೀರಿಳಿಯದ ಗಂಟಲೊಳ್ ಬರ್ಗರ್,
ಪಿಜ್ಜಾ ತುರುಕಿದಂತೆ..!!
ಇಷ್ಟಕ್ಕೂ ನಾವು ನಮ್ಮ
ಭಾಷೆಯನ್ನು ಮಾತ್ರ ಬಳಸಬೇಕು, ಬೇರೆ ಭಾಷೆಯನ್ನು
ಬಳಸಲೇಬಾರದೆಂಬ ತಮಿಳುವಾದ ನಮಗೆ ಬೇಕಿಲ್ಲ.. ಕನ್ನಡ ಬಾವಿಯೊಳಗಿನ ಕಪ್ಪೆಯಾಗುವುದು ಬೇಡ.. ನಾವು ಬೇರೆ
ಭಾಷೆಗಳನ್ನೂ ಕಲಿಯಬೇಕು.., ನಮಗೆ ಮುಂದುವರೆದ
ಸಂಸ್ಕೃತಿಗಳ ಪರಿಚಯವೂ ಇರಬೇಕು.. ಏಕೆಂದರೆ ಸಂವಹನದಿಂದ ಮಾತ್ರ ಭಾಷೆ, ಸಂಸ್ಕೃತಿಗಳ ಬೆಳವಣಿಗೆ ಸಾಧ್ಯ. ಆದರೆ ಇವೆಲ್ಲದರ ನಡುವೆ ನಾವು ನಮ್ಮತನವನ್ನು
ಉಳಿಸಿಕೊಳ್ಳಬೇಕು. ಮುತ್ತು ಕೊಡುವವರು ಬಂದಾಗ ತುತ್ತು ಕೊಟ್ಟ ಕನ್ನಡ ಭಾಷೆಯನ್ನು
ಮರೆಯಬಾರದಲ್ಲವೇ? ಆದರೆ ಇವೆಲ್ಲಾ ನಮ್ಮ ಕನ್ನಡ ಕಂದಮ್ಮಗಳಿಗೆ
ತಿಳಿಯುವುದಾದರೂ ಹೇಗೆ? ನಮ್ಮ festuಗಳು ಕೇವಲ ಮನೋರಂಜನೆಯನ್ನಷ್ಟೇ ಕೇಂದ್ರೀಕರಿಸದೆ ಈ
ನಿಟ್ಟಿನಲ್ಲೂ ಯೋಚಿಸಬೇಕೆಂದೆನಿಸುವುದಿಲ್ಲವೇ?
ಪ್ರಪಂಚ ಕೆಟ್ಟು
ಹೋಗಿದೆ ಕಣ್ರಿ… ಇಲ್ಲಿ ಕಾಸಿದ್ದೋನೇ ಬಾಸು... ಬಡವರಿಗೆ ಏನಿದ್ದರೂ ದೇವರೇ ಗತಿ..( ಕ್ಷಮಿಸಿ,
ಬಡತನವೇ ಗತಿ!) ಹಾಗೆಂದು ಪ್ರತಿಭಾವಂತರಿಗೆ ಇದು ಕಾಲವೇ ಅಲ್ಲವೆಂದೇನಲ್ಲ..
ಪ್ರತಿಭೆಯ ಜೊತೆಗೆ ಬುಧ್ಧಿವಂತಿಕೆ ಇರುವವರು ಇಲ್ಲಿ ಬದುಕಬಹುದು.
ಕೊನೆಯದಾಗಿ, ಹಲವರಿಗೆ ಈ ಲೇಖನದಲ್ಲಿ ಋಣಾತ್ಮಕ ಅಂಶಗಳಿವೆ
ಎಂದನಿಸಬಹುದು. ಒಂದು ಲೋಟದಲ್ಲಿ ಅರ್ಧ ನೀರಿದ್ದರೆ, ಲೋಟವು ಅರ್ಧ ಖಾಲಿಯಾಗಿದೆ ಎನ್ನುವುದಕ್ಕಿಂತ ಲೋಟವು ಅರ್ಧ ತುಂಬಿದೆ(
Positive thinking) ಎನ್ನಬೇಕು ನಿಜ.
ಆದರೆ ಖಾಲಿ ಲೋಟದಲ್ಲಿ ಸೊನ್ನೆ ನೀರಿದೆ ಎಂದು ಹೇಳಲು ಸಾಧ್ಯವೇ??
Dhananjay
3rd Year E&C
RVCE
(14/04/2011)